ಸ್ನಾನಾ..ಮೈಗಲ್ಲ ಕಂದ ಮನಸ್ಸಿಗೆ...
ಕೆಲವರದು ಮಡಿ ಕೆಲವರಿಗೆ ಮಡೆ....
ಅವರವರ ಭಾವ ಅವರವರ ಭಕ್ತಿ...
ಅವರವರ ಬಕೀಟಿನ ನೀರು....
ಮನಸ್ಸಿನೋಳಗೆ ಮೂರ್ತಿ ಇಟ್ಟು ಎಳಿಯೋದು..
ನಂಬಿಕೆ ಅನ್ನೋ ತೇರು...
ನೀನೊಲಿದರೆ..ಕೊರಡೂ ಕೊನರುವುದಯ್ಯ...
ಒಲಿಸಿಕೊಳ್ಳೊ ವಿಧಾನ ನೂರೆಂಟು ಕಣಯ್ಯ...
ನಮ್ಮ ಸ್ವಾರ್ಥಕ್ಕೆ ಕುರಿ ಕೋಣ ಕಡೀಲಿಲ್ಲ ಅಂದ್ರೆ ಅಷ್ಟೇ ಸಾಕಯ್ಯ ತಂದೆ.
ತಪ್ಪೂ ಮಾಡದವರು ಯಾರವರೆ?...
ನೀನು ಮಾಡ್ತಿರೋದು ತಪ್ಪು ಅಂತ ಉಗಿಯಕ್ಕೆ ಹುಟ್ಟಿರೋರು..
ಮತ್ತೂ ಹೆಚ್ಚವರೆ....
ಎದ್ದು ಬಂದು ಎದೆಗೆ ಒದಿಯೋ ಮಂದಿ ಉರುಳಾಡ್ತಾ ಅವರೆ...
ಕಜ್ಜೀಗೆ ಮುಲಾಮು ಹಚ್ಚಿ..
ಉಂಡ ಎಲೆ ಎತ್ತಕ್ಕೆ ಬಿಡೀ..
ಅನ್ನೊ ಮಂದಿ.
.ಹನ್ನೊಂದನೇ ದಿನ್ನಕ್ಕೆ ಅಪ್ಪ ಅಮ್ಮನ್ನೂ ಕಾಗೆ ಮಾಡಿ..
ಬ್ರಾಮ್ಹಣನಿಗೇ ದಕ್ಷಿಣೆ ಕೊಟ್ಟು..ಕಾ..ಕಾ..ಕಾ ಅಂತಾರೆ..
ಕಾಶೀಗೆ ಹೋದ್ರೆ ಕೈಲಾಸ ಕಾಂಬೆ ಅನ್ನುತ್ತಾರೆ...
ಕ್ಯಾಮರ ಹಿಡಿದು ಹೆಣ ಸುಡೋ ಫ್ರೇಮಿಂಗ್ ಮಾಡ್ತಾರೆ...
ಎಲ್ಲಾ ಗೋಬಲ್ ವಾರ್ಮಿಂಗೂ...ಲೋಕಲ್ ಬರ್ನಿಂಗೂ...
ಹಿಮಾಲದಲ್ಲಿ ಉಚ್ಚೇ ಹ್ಯುದವನಿಗೆ ಅದು ಮೌಂಟ್ ಎವರೆಷ್ಟು..
ಅದು ಶಿವಾಲಯ ಅನ್ನುವ ಬೇರೆಯವರ ಭಾವನೆಗೆ ಅವನ ಕಿಮ್ಮತ್ತೆಷ್ಟು?
ನೀ....ಲೋಕದ ಕಾಳಜಿ ಮಾಡುವೆನೆಂತಿ..
.ಯಾರ ಬ್ಯಾಡಂತರ ಮಾಡಪ್ಪ ಚಿಂತಿ....ಶಿಶುನಾಳ ಷರೀಫ....
ಒಂದು ನಿಮಿಷ ಬಂದೆ..ಸ್ನಾನಕ್ಕೆ ಹೊತ್ತಾಯಿತು :)
No comments:
Post a Comment