ಈ ವೈಯಸ್ಸಿನಲ್ಲಿ ಯಾರಿಗೋಸ್ಕರ ಉಪವಾಸ ಮಾಡ್ತಿದ್ದೀರ ತಾತ. ಏಳಿ ಹೊತ್ತಾಯಿತು..ಸ್ವಲ್ಪ ಗಂಜಿ ಕುಡೀರಿ. ಹೇಳ್ತೀನ್ ಕೇಳಿ ನೀವ್ ಏನಾದ್ರು ಗೊಟಕ್ ಅಂದ್ರೆ...ಇಲ್ಲೆಲ್ಲಾ ಟೋಪಿ ಹಾಕೊಂಡ್ ಅದನ್ನೇ ಒಂದು ಫ್ಯಾಷನ್ ಮಾಡ್ತಾ ಇದ್ದಾರಲ್ಲಾ ಅವರೆಲ್ಲಾ ಇನ್ನು ಹದಿನೈದು ದಿನಕ್ಕೆ ಮಾಯ. ನೀವು ರಾಜಕಾರಣಿಗಳ ಬ್ರಷ್ಟಾಚಾರದ ಬಗ್ಗೆ ಬೇಜಾರ್ ಮಾಡಿಕೊಂಡು ಇಷ್ಟೆಲ್ಲಾ ವದ್ದಾಡ್ತಾ ಇದ್ದೀರಲ್ಲ? ಇದೆಲ್ಲಾ ಮುಗಿದು ಇನ್ನೊಂದು ಎಲೆಕ್ಷನ್ ಅಂತ ಬರಲಿ ನೋಡಿ...
೧. ಎಲ್ಲಾರೂ ಓಟು ಹಾಕೋದು ಅವರ ಜಾತಿಯವನಿಗೇ. ಅವನೆಷ್ಟೇ ಕೆಟ್ಟ್ ಕುಲಗೆಟ್ಟು ಹೋಗಿರಲಿ...ಕೊನೆಗೆ ಹೋಗಿ ಅವನನ್ನೇ ಕುರ್ಚಿ ಮೇಲೆ ಕೂಡಿಸ್ತಾರೆ.ಯೋಗ್ಯರಾರು ಎಲಕ್ಷನ್ ಗೆಲ್ಲಲ್ಲಾ ಜಾತಿ ವಿಷ ಇರೋವರೆಗು. ಈ ಜನಗಳ ತಲೆ ಒಳಗಿರೋ ಆಂತರಿಕ ಬ್ರಷ್ಟಾಚಾರಕ್ಕೆ ಯಾವ ಮಸೂದೆ ತರ್ತೀರ ತಾತ?
೨.ಇವತ್ತು ಒಬ್ಬ ಮಾಜಿ ಮುಖ್ಯಮಂತ್ರಿ ಕಳ್ಳಾ ಅಂತ ಗೊತ್ತಿದ್ದೂ ಕೂಡ, ಅವನ ಮನೆ ಮುಂದೆ ಯಾವ ಒಬ್ಬ ಯುತ್ ಕೂಗಾಡೋದು ನೋಡಿದ್ದೀರ? ಇಲ್ಲಾ. ಅವನಿನ್ನೂ ಬಿಳಿ ಬಟ್ಟೇ ಹಾಕೊಂಡು ಸ್ವಾಮೀಜಿಗಳಿಗೆ "ಬೆನ್ಸ್" ಕಾರಿನಲ್ಲಿ ಕೂರಿಸಿಕೊಂಡು ಒಂದು ಪಂಗಡದ ನಾಯಕ ಆಗಿ ಹೋಗ್ತಾನೆ. ಅವನ ವಿರುದ್ದ ಮಾತಾಡಿದರೆ ನೀವು ಅವನ ಜಾತಿ ವಿರೋಧಿ, ಅವನು ಕಾರಿನಲ್ಲಿ ಕೋರಿಸ್ಕೊಂಡ ಸ್ಮಾಮೀಜಿಯ ವಿರೋಧಿ. ಇದಕ್ಕೆ ಯಾವ ಕಾನೂನು ಸಾದ್ಯ ತಾತ?
೩.ಎಲೆಕ್ಷನ್ ಟೈಮ್ ನಲ್ಲಿ ಕೈಗೆ ಹಾಕಿದ ಎಂಜಲನ್ನು ತಿಂದು ಯಾವನೋ ಒಬ್ಬನಿಗೆ ಓಟು ಹಾಕಿ, ಮುಂದೆ ರೇಷನ್ ಕಾರ್ಡ್ ಹಿಡ್ಕೊಂಡು ರೇಷನ್ ಅಂಗಡಿ ಮುಂದೆ ಅಕ್ಕಿ ಕೊಡ್ಲಿಲ್ಲಾ ಅಂತ ಗಲಾಟೆ ಮಾಡೋ ಜನಕ್ಕೆ ಮೊದಲೇ ಸರಿಯಾದವನಿಗೆ, ನಿಮ್ಮ ಜಾತಿ ಅಲ್ಲದಿದ್ದರೂ ಸಹ ಓಟು ಹಾಕಿ ಅಂತ ಹೇಳಕ್ಕೆ ಯಾವ ಮಸೂದೆ ಮಾಡ್ತೀರ ತಾತ?
೪.ಇನ್ನು ನಮ್ಮ ನವ ಯುವಕರು. ಅವರೆಲ್ಲಾ "ಇನ್ಶ್ಟಾಲ್ಮೆಂಟ್ " ನಲ್ಲಿ ಕಾರು ತಗೊಂಡು ವಾರಕ್ಕೊಂದು ಸರಿ ನಂದಿ ಬೆಟ್ಟಕ್ಕೆ ಹೋಗಿ ಕುಡಿದು. ಬರ್ತಾ ಏರ್ಪೋಟ್ ರೋಡ್ನಲ್ಲಿ ಡಿವೈಡರ್ಗೆ ಗುದ್ದಿ, What a pity government cant even make proper road. its not like this in US you know? ಅಂತ ಕಿಲ ಕಿಲಸಿ. ಮುಂದಿನ ಇನ್ಸ್ಟಾಲ್ಮೆಂಟ್ ಕಟ್ಟದೇ ಇದ್ರೆ ಕಾರು ಕಿತ್ಕೊಂಡ್ ಹೋಗ್ತಾರಲ್ಲ ಅಂತ ಅವರ ಬಾಸು ಏನೇ ಹೇಳಿದ್ರೂ ಅದನ್ನ ನಾಲಿಗೇಲಿ ನೆಕ್ಕತಾ...ತಮ್ಮನ್ನ ತಾವೇ ಅಡಾ ಇಟ್ಟಿರುವಾಗ...ಯಾವ್ ಮುಂದಿನ ಜನಾಂಗಕ್ಕೆ ತಾತ ನಿಮ್ಮ ಉಸಿರು ಕೊಡೋದು?
೫.ನಮ್ಮ ಮದ್ಯಮ ವರ್ಗದ ಅಪ್ಪ ಅಮ್ಮಂದಿರು. ಎಷ್ಟೇ ಕರ್ಚಾದ್ರು ಸರಿ. ಲಕ್ಷಾಗಟ್ಟಲೇ ಕೊಟ್ಟರೂ ಸರಿ. ನನ್ನ ಮಗ ಇಂತಾ ಕಾಲೇಜ್ ನಲ್ಲೇ ಓದ್ ಬೇಕು ಅಂತ ಹತ್ತನೇ ಕ್ಲಾಸಿಗೆ ಬಾಗಿಲು ಹಾಕಿ ಕೂಡಿ ಹಾಕಿ ಸೆಕೆಂಡ್ ಪಿಯುಸಿ ಹೊತ್ತಿಗೆ ಬಿಳುಚಿಕೊಂಡು ಹೊರಗೆ ಬರೋ ಆ ಕಂದಮ್ಮನನ್ನ...CET ಮುಂದೆ ಕುಂದರಿಸಿ "ನೋಡಪ್ಪಾ ಯಾವುದೋ ಪರದೇಶಿ ಕಂಪನಿ "ನೀನ್ ಇಷ್ಟು ಓದಿದ್ರೆ ನಾನು ಇಷ್ಟು ಕೊಡ್ತೀನಿ" ಅಂತ times of Inida ದಲ್ಲಿ ಪ್ರಚಾರ ಮಾಡವರೆ. ನೀನ್ ಅಷ್ಟು ಓದಿ ದೇಶ ಬಿಟ್ಟು ಹೋಗಿ..ಅಲ್ಲಿ ಂದ ಡಾಲರ್ ಕಳ್ಸು...ಮಲೆನಾಡಿನ ಯಾವುದಾದ್ರು "Fresh" ಹೆಣ್ ಮಗಳನ್ನ ನಾವು ತಂದು ಗಂಟು ಹಾಕ್ತೀವಿ. ಅಂತ ಒಪ್ಪಸಿ ದೇಶ ಬಿಡಿಸಿ ಇವುರು ಪಾರಿನ್ ಗೆ ಹೋಗುವಾಗ ಮಗನ ಮನೇಗೆ ತಗೊಂಡು ಹೋಗಕ್ಕೆ ಉಪ್ಪಿನ ಕಾಯಿ ಮಾಡ್ಟಾ ಕೂತಿರುವಾಗ ಇವರನ್ನ ಏನು ಹೇಳಿ ತಿದ್ದುತೀರ ತಾತ?
೫. ಡಾಕ್ಟರ್ ಓದ್ತಾ ಇರೋ ಕಂದಮ್ಮಗಳ ಸುದ್ದಿನೇ ಕೇಳ್ಬೇಡಿ...ಅವನ್ನ ಓದಿಸಿದ ಇದೇ ದೇಶದ ಹಳ್ಳಿಗಳಿಗೆ ಅವರು ಹೋಗಲ್ಲವಂತೆ. ಅಲ್ಲಿ ಸೇವೆ ಮಾಡಲ್ಲವಂತೆ. ಅವರು ಓದಿಗೆ ಹಾಕಿದ ಇನ್ವೆಸ್ಟಮೆಂಟ್ ಹುಟ್ಟಲ್ಲ್ಲ ಅಂತ ಗೊಣಗ್ತಾರೆ...ಇದಕ್ಕೆ ಏನು ಪರಿಹಾರ ತಾತ.
ಪಾಪ..ನಿಮಿಗೆ ಯಾಕೆ ಈ ಗೋಳು...ಬನ್ನಿ ನಿಮ್ಮ ಹಳ್ಳಿ ಮನೆ ಹಿಂದೆ ಒಂದು ಗುಬ್ಬಿ ಗೂಡು ಕೆಳಗೆ ಬಿದ್ದಿದೆ ಮೇಲೆ ಎತ್ತಿಡಿ...
1 comment:
ಜನ ಲೋಕಪಾಲವನ್ನು ನಿರ್ಧರಿಸುವವನು ಒಬ್ಬ ವ್ಯಕ್ತಿಯೇ ಅವನು ಲಂಚಾವತಾರಿಯಾದರೆ ಈಗಿರುವ ಹತ್ತಕ್ಕೆ ಇವನೊಬ್ಬ ಹನ್ನೊಂದು....
Post a Comment